HomeNationalಭೀಮಾ ಕೋರೆಗಾಂವ್ ವಿಚಾರಣಾ ಆಯೋಗದ ಮುಂದೆ ಹಾಜರಾದ ಶರದ್ ಪವಾರ್: ಏನಿದು ಭೀಮಾ ಕೋರೆಗಾಂವ್ ಕೇಸು?

ಭೀಮಾ ಕೋರೆಗಾಂವ್ ವಿಚಾರಣಾ ಆಯೋಗದ ಮುಂದೆ ಹಾಜರಾದ ಶರದ್ ಪವಾರ್: ಏನಿದು ಭೀಮಾ ಕೋರೆಗಾಂವ್ ಕೇಸು?

ದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಗುರುವಾರ ಭೀಮಾ ಕೋರೆಗಾಂವ್ ವಿಚಾರಣಾ ಆಯೋಗದ ಮುಂದೆ ಹಾಜರಾಗಿದ್ದು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಆಯೋಗದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ ಹತ್ತಕ್ಕೂ ಹೆಚ್ಚಿನ ರಾಜಕಾರಣಿಗಳಲ್ಲಿ ಪವಾರ್ ಕೂಡ ಸೇರಿದ್ದಾರೆ.

ಜನವರಿ 1, 2018 ರಂದು ಭೀಮಾ ಕೋರೆಗಾಂವ್ ಹಿಂಸಾಚಾರವು ಓರ್ವ ವ್ಯಕ್ತಿಯ ಜೀವವನ್ನು ಬಲಿತೆಗೆದುಕೊಂಡು, ಅನೇಕರನ್ನು ಗಾಯಳುಗಳನ್ನಾಗಿಸಿದ ಪ್ರಕರಣದ ವಿಚಾರಣೆಯನ್ನು ಆಯೋಗವು ನಡೆಸುತ್ತಿದೆ. ಕೋರೆಗಾಂವ್ ಭೀಮಾ ಗ್ರಾಮದಲ್ಲಿ 1818 ರಲ್ಲಿ ನಡೆದ ಯುದ್ಧವನ್ನು ಸ್ಮರಿಸಲು ಸಾವಿರಾರು ಜನರು ಜಮಾಯಿಸಿದ್ದರು. ಜನವರಿ 1, 1818 ರಂದು ಪೇಶ್ವೆಗಳ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸ್ಮಾರಕವಾಗಿ ಬ್ರಿಟಿಷರು ವಿಜಯ ಸ್ತಂಭವನ್ನು (ವಿಜಯ ಸ್ತಂಭ) ನಿರ್ಮಿಸಿದ್ದರು.

ಯುದ್ಧದ 200 ನೇ ವರ್ಷವನ್ನು ಸ್ಮರಿಸುವ ಸಲುವಾಗಿ ಹಿಂದಿನ ವರ್ಷಗಳಿಗಿಂತ ದೊಡ್ಡ ಮಟ್ಟದಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಸಂಭ್ರಮಾಚರಣೆ ನಡೆಯಿತು. ಆಚರಣೆಯ ಸಂದರ್ಭದಲ್ಲಿ ದಲಿತ ಮತ್ತು ಮರಾಠಾ ಗುಂಪುಗಳ ನಡುವೆ ಹಿಂಸಾತ್ಮಕ ವಾಗ್ವಾದಗಳು ನಡೆದವು, ಇದು ವ್ಯಕ್ತಿಯ ಸಾವಿಗೆ ಕಾರಣವಾಯಿತು ಮತ್ತು ಅನೇಕರಿಗೆ ಗಾಯಗಳು ಮತ್ತು ಹಾನಿಗಳಿಗೆ ಕಾರಣವಾಯಿತು.

ಆ ಬಳಿಕ ಘಟನೆಗೆ ಸಂಬಂಧಿಸಿ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಹಲವು ಜಾತ್ಯತೀತರೆಂದು ಕರೆಸಿಕೊಳ್ಳುತ್ತಿದ್ದ ನಾಯಕರುಗಳನ್ನು ಬಂಧಿಸಲಾಯಿತು. ಪ್ರಚೋದನಕಾರಿ ಭಾಷಣ ಮಾಡಿ ಗಲಭೆಗೆ ಕಿಚ್ಚು ಹಚ್ಚಿದ್ದ ಜಿಗ್ನೇಶ್ ಮೇವಾಣಿ, ದೇಶ ದ್ರೋಹದ ಚಟುವಟಿಗಳಿಗೆ ಹೆಸರುವಾಸಿಯಾದ ಉಮರ್ ಖಾಲಿದ್ ಮುಂತಾದವರ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿತ್ತು.

ಭೀಮಾ ಕೋರೆಗಾಂವ್ ಹಿಂಸಾಚಾರ ರಾಜಕೀಯ ಪಿತೂರಿ ಎಂಬ ಗುಮಾನಿ ಕೂಡ ಕೇಳಿಬಂದಿತ್ತು. ಆಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಾಗು ಕೇಂದ್ರದಲ್ಲಿ ಮುಂದಿನ ವರ್ಷ (೨೦೧೯) ನಡೆಯಲಿದ್ದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರಕಾರ ಮರು ಆಯ್ಕೆ ಆಗದಂತೆ ತಡೆಯಲು ಮಾಡಿದ ಮಾಸ್ಟರ್ ಪ್ಲಾನ್ ಆಗಿತ್ತು ಎನ್ನಲಾಗಿದೆ. ಗಲಭೆ ಮೂಲಕ ಸರಕಾರವನ್ನು ದಲಿತ ವಿರೋಧಿ ಎಂದು ಬಿಂಬಿಸುವ ವ್ಯವಸ್ಥಿತ ಷಡ್ಯಂತ್ರ ಅಡಗಿತ್ತು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments