
ಮುಂಬಯಿ: ಮಹಾರಾಷ್ಟ್ರದ ಶಿವಸೇನೆ ಸಚಿವ ಏಕನಾಥ್ ಶಿಂಧೆ ಅವರು ತಮ್ಮ ಪಕ್ಷದ ಬಗ್ಗೆ ‘ಅಸಮಾಧಾನ’ ಹೊಂದಿದ್ದಾರೆಂದು ವರದಿಯಾಗಿದ್ದು ಗುಜರಾತ್ನ ಸೂರತ್ನ ಹೋಟೆಲ್ವೊಂದರಲ್ಲಿ ಕನಿಷ್ಠ 10 ಮಂದಿ ಬಂಡಾಯ ಶಾಸಕರೊಂದಿಗೆ ಬೀಡುಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬೆಳವಣಿಗೆಯು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹವನ್ನು ಹುಟ್ಟುಹಾಕಿದೆ.
ಬಿಜೆಪಿ ಆಡಳಿತವಿರುವ ಗುಜರಾತ್ನಲ್ಲಿ ಹೋಟೆಲ್ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಶಿಂಧೆ ಮಂಗಳವಾರ ಮಧ್ಯಾಹ್ನ ಸೂರತ್ನಿಂದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.
ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಆಡಳಿತ ಮೈತ್ರಿ ಅಸಮಾಧಾನಗೊಂಡಿರುವ ಮಗಥಾಣೆ ಶಾಸಕ ಪ್ರಕಾಶ್ ಸುರ್ವೆ, ರಾಧಾನಾಗ್ರಿ ಶಾಸಕ ಪ್ರಕಾಶ್ ಅಬಿತ್ಕರ್, ಮೀರಾ ಭಾಯಂದರ್ನ ಕೊಲ್ಲಾಪುರ ಶಾಸಕಿ ಗೀತಾ ಜೈನ್, ಅಂಬರನಾಥ್ ಶಾಸಕ ಬಾಲಾಜಿ ಕಿಣಿಕರ್, ಮಹಾಡ್ ಶಾಸಕ ಭರತ್ ಗೊಗವಾಲೆ, ಅಲಿಬಾಗ್ ಶಾಸಕ ಮಹೇಂದ್ರ ದಳವಿ, ಕರ್ಜಾತ್ ಶಾಸಕ ಮಹೇಂದ್ರ ಥೋರ್ವೆ, ಪಾಲ್ಘರ್ ಶಾಸಕ ಶ್ರೀನಿವಾಸ ವಂಗಾ, ಭಿವಂಡಿ ಗ್ರಾಮಾಂತರ ಶಾಸಕ ಶಾಂತಾರಾಮ್ ಮೋರೆ ಮತ್ತು ರಾಯಗಢದ ಇತರ 3 ಶಾಸಕರು ಪ್ರಸ್ತುತ ಸೂರತ್ನ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿಗಿನ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. 10 ಎಂಎಲ್ಸಿ ಸ್ಥಾನಗಳಿಗೆ ಎಂವಿಎ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ, ಬಿಜೆಪಿಯ ವಿಜೇತ ಅಭ್ಯರ್ಥಿ ಪ್ರವೀಣ್ ದಾರೆಕರ್, “ನಾವು ತುಂಬಾ ಸಂತೋಷವಾಗಿದ್ದೇವೆ; ಮಹಾರಾಷ್ಟ್ರ ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ. ಶಿವಸೇನೆ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ 100 ಪ್ರತಿಶತದಷ್ಟು ಅಡ್ಡ ಮತದಾನ ನಡೆದಿದೆ. ಇಲ್ಲದಿದ್ದರೆ ನಮಗೆ ಇಷ್ಟು ಮತಗಳು ಬರುತ್ತಿರಲಿಲ್ಲ.” ಎಂದು ಬಾಂಬ್ ಸಿಡಿಸಿದ್ದರು.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































