
ಉದಯ್ಪುರ: ಟಿವಿ ಡಿಬೇಟ್ ನಲ್ಲಿ ಮುಸ್ಲಿಂ ಪರ ವಾದಿಸಿದವರು ಹಿಂದೂ ದೇವರ ಅವಹೇಳನ ಮಾಡಿದ ಸಂದರ್ಭ ಅದನ್ನು ಪ್ರತಿಭಟಿಸಲು ಪ್ರವಾದಿ ಪೈಗಂಬರ್ ಬಗ್ಗೆ ಮಾತನಾಡಿದ್ದ ನೂಪುರ್ ಶರ್ಮ ಅವರನ್ನು ಬೆಂಬಲಿಸಿದ್ದ ರಾಜಸ್ಥಾನದ ಉದಯಪುರದ ಹಿಂದೂ ಟೈಲರ್ ಒಬ್ಬರನ್ನು ಮುಸ್ಲಿಂ ಮತಾಂಧರು ತಲೆ ಕಡಿದು ಕೊಂದಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರು ಮುಸ್ಲಿಂ ಉಗ್ರ ಮನಸ್ಥಿತಿಯ ಮತಾಂಧರು ಕೊಂದ ಹರಿತವಾದ ರಕ್ತಸಿಕ್ತ ಆಯುಧಗಳನ್ನು ತೋರಿಸಿ “ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಮತ್ತು ರಾಜಸ್ಥಾನ ನಗರದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದೇವೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಕೂಡ ಮಾಡಿದ್ದಾರೆ. ಇದೀಗ ಆ ಇಬ್ಬರೂ ಕೊಲೆಗಡುಕ ಮತಾಂಧರನ್ನು ಅರೆಸ್ಟ್ ಮಾಡಲಾಗಿದೆ.
ಉದಯ್ಪುರದಲ್ಲಿ ವ್ಯಕ್ತಿಯೊಬ್ಬರ ಹತ್ಯೆ ಮಾಡಿದ ಆರೋಪಿಗಳನ್ನು ರಾಜ್ಸಮಂದ್ನಿಂದ ಬಂಧಿಸಲಾಗಿದೆ ಎಂದು ರಾಜಸ್ಥಾನ ಸಿಎಂ ಮಂಗಳವಾರ ತಿಳಿಸಿದ್ದಾರೆ. “ಈ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ಅಧಿಕಾರಿಗಳ ಅಡಿಯಲ್ಲಿ ಮಾಡಲಾಗುತ್ತದೆ ಮತ್ತು ತ್ವರಿತ ತನಿಖೆಯನ್ನು ಖಚಿತಪಡಿಸುವ ಮೂಲಕ ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ” ಎಂದು ಅವರು ಹೇಳಿದರು.
ಸೋಮವಾರ ಉದಯ್ಪುರದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಹಿಂದೂ ಟೈಲರ್ನ ಕತ್ತು ಸೀಳಿ, ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಮತ್ತು ರಾಜಸ್ಥಾನ ನಗರದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ನಲ್ಲಿ ಹೇಳಿದ್ದರು. ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಕ್ಲಿಪ್ನಲ್ಲಿ, ದುಷ್ಕರ್ಮಿಗಳಲ್ಲಿ ಒಬ್ಬ ಆ ಹಿಂದೂ ವ್ಯಕ್ತಿಯ ಶಿರಚ್ಛೇದ ತಾವೇ ಮಾಡಿರುವುದಾಗಿ ಘೋಷಿಸಿದ್ದ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೂಡ ಜೀವ ಬೆದರಿಕೆ ಹಾಕಿದ್ದ.
ನಗರದ ಧನ್ ಮಂಡಿ ಪ್ರದೇಶದಲ್ಲಿರುವ ಹಿಂದೂ ಟೈಲರ್ ಕನಯ ಲಾಲ್ ಅವರ ಅಂಗಡಿಗೆ ಗ್ರಾಹಕರಂತೆ ಆಗಮಿಸಿದ ಮುಸ್ಲಿಂ ದಾಳಿಕೋರರು ಟೈಲರ್ ಬಳಿ ಬಟ್ಟೆ ಹೊಲಿಸಲು ಒಬ್ಬನ ಅಳತೆಗಳನ್ನು ತೆಗೆದುಕೊಂಡಿದ್ದಾರೆ. ನಂತರ ತನ್ನನ್ನು ರಿಯಾಜ್ ಎಂದು ಗುರುತಿಸಿಕೊಂಡವನು ತನ್ನ ಹರಿತವಾದ ಆಯುಧದಿಂದ ಟೈಲರ್ ಕತ್ತನ್ನು ಸೀಳಿದ್ದಾನೆ. ಮತ್ತೋರ್ವ ವ್ಯಕ್ತಿ ತನ್ನ ಮೊಬೈಲ್ನಿಂದ ಆ ಬರ್ಬರ ಹತ್ಯೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ.
ಮುಸ್ಲಿಂ ಮನಸ್ಥಿತಿಯ ಬಗ್ಗೆ ಈಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು ಇವರುಗಳಿಗೆ ವ್ಯಾಪಾರ ಬಹಿಷ್ಕಾರವೇ ಸರಿಯಾದ ಮದ್ದು ಎಂದು ಹೆಸರು ಹೇಳಲಿಚ್ಛಿಸದ ಹಿಂದೂ ಮುಖಂಡರೊಬ್ಬರು ಹೇಳಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL